ಮಾರ್ಸ್ ಫ಼ಿಲಂಸ್ ಲಾಂಛನದಲ್ಲಿ ಸುರೇಶ್ಜೈನ್ ನಿರ್ಮಿಸುತ್ತಿರುವ ‘ಚಿರು ಚಿತ್ರಕ್ಕೆ ಹಾಡಿನ ಚಿತ್ರೀಕರಣ ಆರಂಭವಾಗಿದೆ. ರಾಂನಾರಾಯಣ್ ರಚನೆಯ ‘ನಾ ಹಾಡಲಾ ಉಲ್ಲಾಸದ ಹಂಬಲ - ಹಾರು ಸಂತೋಷಕ್ಕೆ ಜಿಗಿದು ಹಾರು ಉಲ್ಲಾಸಕ್ಕೆ ಎಂಬ ಗೀತೆಯ ಚಿತ್ರೀಕರಣ ಬಿಡದಿ ಬಳಿಯ ಇನ್ನೋವೆಟಿವ್ ಫ಼ಿಲಂ ಸಿಟಿಯಲ್ಲಿ ನೆಡೆದಿದೆ. ಚಿರಂಜೀವಿ ಸರ್ಜಾ, ಕೃತಿ, ಕಿರಣ್ ಹಾಗೂ ಬುಲೆಟ್ಪ್ರಕಾಶ್ ಅಭಿನಯಿಸಿದ ಈ ಗೀತೆಗೆ ಮುರಳಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಈ ಹಾಡನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ.
ಗಿರಿಧರ್ ಸಂಗೀತ ಸಂಯೋಜಸುತ್ತಿರುವ ಈ ಚಿತ್ರವನ್ನು ಮಹೇಶ್ಬಾಬು ನಿರ್ದೇಶಿಸುತ್ತಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ನಿರ್ದೇಶಕರೇ ಬರೆದಿದ್ದಾರೆ. ಸ್ವಾಮೀಜಿ ಕಥೆ, ಸುಂದರನಾಥಸುವರ್ಣ ಛಾಯಾಗ್ರಹಣ, ಶ್ರೀ(ಕ್ರೇಜಿಮೈಂಡ್ಸ್) ಸಂಕಲನ, ರವಿವರ್ಮ ಸಾಹಸ, ಮುರಳಿ, ಹರ್ಷ ನೃತ್ಯ ಸಂಯೋಜನೆಯಿರುವ ‘ಚಿರು ಚಿತ್ರದ ನಾಯಕನಾಗಿ ಚಿರಂಜೀವಿ ಸರ್ಜಾ ಮತ್ತು ನಾಯಕಿಯಾಗಿ ಕೃತಿ ಅಭಿನಯಿಸುತ್ತಿದ್ದಾರೆ. ರಂಗಾಯಣರಘು, ಬುಲೆಟ್ಪ್ರಕಾಶ್, ಕಿರಣ್(ಹಾಗೆಸುಮ್ಮನೆ), ಪಿ.ಎನ್.ಸತ್ಯ, ನರಸಿಂಹಜೋಶಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.